ನಿಸರ್ಗ ಸ್ವರ್ಗ

ಹಚ್ಚ ಹಸಿರಿನ ಉಡುಪುಟ್ಟ
ನಮ್ಮಯ ಕಾನನ ಧಾಮ
ಸ್ವರ್ಗ ಸಮಾನ ನಿಸರ್ಗ
ಸದಾ ಸಂತಸ ಚೆಲ್ಲುವ
ಜೀವನದುಸಿರಿನ ತಾಣ

ತುಂಬಿಹ ಹಕ್ಕಿಗಳ ಚಿಲಿಪಿಲಿಗಾನ
ಧರೆಯ ಚುಂಬನಗೈಯುತ
ತರು-ಲತೆಗಳ ಸಿಂಚನಗೈಯುತ
ಧಾವಿಸಿ ಹರಿಯುತಿಹದು

ಜಲಧಾರೆಯ ಜುಳು… ಜುಳು… ಗಾನ
ಭ್ರಮರಗಿಡ-ಮರಗಳ ಝೇಂಕಾರ
ಸುಮಧುರ ಸುಮಗಳ ನಾದ
ಸಂತಸಗೊಳಿಸುತ ಸೆಳೆಯುತಲಿ
ತನು-ಮನ ಉಲ್ಲಾಸದಿ ಕುಣಿಯುತಿಹದು

ಅನುಪಮ… ಆನಂದಮಯ
ರಮ್ಯ-ಸೌಂದರ್ಯದ ನೋಟ
ಚೆಲ್ಲಿಹಳು ಮಡಿಲೆಲ್ಲಾ ಮೈಮಾಟ
ಭೂಸಿರಿಗೆ ಹೊಚ್ಚಿಹಳು ಹೊದಿಕೆಯನು
ವಿರಾಜಿಸಿ… ವಿರಮಿಸಿಹಳು ತಾಯಿ…
ಕೈ ಮಾಡಿ ಕರೆಯುತಿಹಳು
ಪ್ರೀತಿ ಪ್ರೇಮದ ಧಾರೆ ಸುರಿಸುತಿಹಳು

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೆಂಪು ದೀಪದ ಕೆಳಗೆ
Next post ನಗೆ ಡಂಗುರ – ೧೪

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

cheap jordans|wholesale air max|wholesale jordans|wholesale jewelry|wholesale jerseys